ಸಿಂಧನೂರು:ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿಯೊಬ್ಬ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗಿನ ಜಾವ ನಗರದ ಗಂಗಾವತಿ ಮುಖ್ಯರಸ್ತೆ ಬಳಿ ನಡೆದಿದೆ. ಮಸ್ಕಿ ತಾಲ್ಲೂಕಿನ ತುಪ್ಪದೂರು ಗ್ರಾಮದ ಕುರಿಗಾಯಿ ಶರಣಬಸವ (30) ಮೃತದುದೈರ್ವಿ. ಮೃತ ವ್ಯಕ್ತಿಯೂ ತನ್ನ ಕುರಿಗಳೊಂದಿಗೆ ಗಂಗಾವತಿ ಮುಖ್ಯ ರಸ್ತೆ ಮೂಲಕ ಸಾಸಲಮರಿ ಕಡೆಗೆ ಸಂಚರಿಸುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಕುರಿಗಾಯಿ ಸೇರಿ ಮೂರು ಕುರಿಗಳು ಸಾವನ್ನಪಿವೆ. ಪ್ರಕರಣ ದಾಖಲಿಸಿಕೊಂಡ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸಿದ್ದಾರೆ.





Recent Comments