Saturday, September 12, 2026
Google search engine
Homeಮುಖ್ಯಾಂಶಗಳು355ನೇ ಆರಾಧನಾ ಮಹೋತ್ಸವ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀಗಳಿಂದ ಚಾಲನೆ

355ನೇ ಆರಾಧನಾ ಮಹೋತ್ಸವ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀಗಳಿಂದ ಚಾಲನೆ

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಎರಡನೇ ದಿನದ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ಸುಜಯೇಂದ್ರ ಮಾರ್ಗ ಕಾರಿಡಾರ್, ಶ್ರೀ ರಘುನಂದನ ತೀರ್ಥ ವಸತಿ ನಿಲಯ (ಡಾರ್ಮಿಟರಿ) ಹಾಗೂ ನವೀಕರಿಸಲಾದ ಪಂಚಮುಖಿ ದರ್ಶನ ಕೊಠಡಿಗಳ ಸಂಕೀರ್ಣವನ್ನು ಉದ್ಘಾಟಿಸಿದರು.ಭಕ್ತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವುದು ಹಾಗೂ ಮಠದ ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 355ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಸಾವಿರಾರು ಜನ ಭಕ್ತರಿ ಸಾಕ್ಷಿಯಾದರು. ಅರಾಧನೆ ಅಂಗವಾಗಿ ಬೆಳಿಗ್ಗೆ ಅಭಿಷೇಕ ,ವಿಶೇಷ ಅಲಂಕಾರ ಕಾರ್ಯಗಳು ಜರುಗಿದವು.

RELATED ARTICLES
- Advertisment -
Google search engine

Most Popular

Recent Comments