ರಾಯಚೂರು,ಜೂ.- ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿದ್ದು ಗಣತಿದಾರರಿಗೆ ಸಮರ್ಪಕ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪೂವಿತಾ.ಎಸ್ಮನವಿ ಮಾಡಿದ್ದಾರೆ.ಮತದಾರರ ಪಟ್ಟಿಯಿಂದ ಕಡಿತವಾಗುವ ಆತಂಕ ಬಿಟ್ಟು ಅಗತ್ಯ ದಾಖಲೆ ನೀಡಿ ಪಾರದರ್ಶಕ ಚುನಾವಣೆ ನಡೆಸಲು ಸಹಕರಿಸಬೇಕು. ಪ್ರತಿವರ್ಷ ಮತದಾರರ ಪರಿಷ್ಕರಣೆ ನಡೆಯುತ್ತಲೇ ಇರುತ್ತದೆ.ಮೃತ ರಾದವರು, ಬೇರೆಡೆ ಸ್ಥಳಾಂತರ ಗೊಂಡವರಮಾಹಿತಿ ಸಂಗ್ರಹ, ಹೊಸಮತದಾರರ ಸೇರ್ಪಡೆ ಪ್ರಕ್ರಿಯೆ ನಡೆಸಲು ಪರಿಷ್ಕರಣೆ ಅಗತ್ಯವಾಗಿದೆ. ಪೂರ್ವಾಗ್ರಹ ಬಿಟ್ಟು ಗಣತಿದಾರ ನೀಡುನ ಗಣತಿ ನಮೂನೆ ಭರ್ತಿ ಮಾಡಿ ಜುಲೈ ೨೯ ವರೆಗೆ ಮಾಹಿತಿ ನೀಡುವ ಅವಕಾಶವಿದೆ. ಸಾರ್ವಜನಿಕರಕು ಸಹಕರಿಸುವಂತೆ ಮನವಿ ಮಾಡಿದ್ದಾರೆ.





Recent Comments