ರಾಯಚೂರು,ಜೂ.೨೧- ನಗರದ ಕುಲಸುಂಬಿ ಕಾಲೋನಿಯಲ್ಲಿ ವ್ಯಕ್ತಿ ಯೊಬ್ಬರನ್ನ ಭೀಕರವಾಗಿ ಕೊಲೆ ರುಂಡವನ್ನು ಕೊಂಡೊಯ್ದು ಘಟನೆ ವರದಿಯಾಗಿದೆ.ಪಶ್ಚಿಮ ಠಾಣೆ ವ್ಯಾಪ್ತಿಯ ಕುಲಸುಂಬಿ ಕಾಲೋನಿಯಲ್ಲಿ ಪ್ರಕರಣ ನಡೆದಿದೆ.ಕೊಲೆಯಾದ ಯುವಕನನ್ನು ತಿರುಪತಿ (೨೮) ಎಂದು ಗುರುತಿಸಲಾಗಿದೆ ಕಳೆದು ಎರಡು ದಿನಗಳಿಂದ ಮುಚ್ಚಿದ ಕೋಣೆಯಲ್ಲಿ ದುರ್ವಾಸನೆ ಬರುತ್ತಿರುವ ಹಿನ್ನಲೆಯ ಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.ಪೊಲೀಸರು ಮನೆಯ ಬಾಗಿಲು ಮುರಿದು ನೋಡಿದಾಗ ರುಂಡವಿಲ್ಲದ ದೇಹ ಪತ್ತೆಯಾಗಿದೆ.ದ್ವೇಷದ ಹಿನ್ನಲೆಯಲ್ಲಿ ಕೊಲೆಯಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈ ಹಿಂದೆಕಳ್ಳತನ ಪ್ರಕರಣದಲ್ಲಿ ಕೊಲೆಯಾಗಿದ್ದ ವ್ಯಕ್ತಿ ಭಾಗಿಯಾಗಿರುವ ಮಾಹಿತಿ ಪೊಲೀಸರು ನೀಡಿದ್ದಾರೆ.





Recent Comments