ರಾಯಚೂರು,ಜು.೧೬- ಕರ್ತವ್ಯ ಲೋಪದ ಆwರೋಪದ ಮೇಲೆ ಲಿಂಗಸೂಗುರು ಮತ್ತು ಮುದುಗಲ್ ಬಿಸಿಎಂ ಮೆಟ್ರಿಕ್ ನಂತರ ಹಾಸ್ಟೆಲ್ ವಾರ್ಡನ್ ಮಹ್ಮದ ಶಫಿ ಎಂಬುವರನ್ನು ಸೇವೆಯಿಂದ ಅಮಾನತ್ ಗೊಳಿಸಿ ಜಿ.ಪಂ ಸಿಇಓ ಈಶ್ವರ ಕಾಂದೂ ಆದೇಶಿಸಿದ್ದಾರೆ.ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ ಮತ್ತು ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ ಜು.೨ ರಂದು ಹಾಸ್ಟೆಲ್ ಗೆ ಭೇಟಿ ನೀಡಿದ್ದ ಸಂದರ್ಬದಲ್ಲಿ ಅವ್ಯವಸ್ಥೆ ಹಾಗೂ ಸಮರ್ಪಕ ಆಹಾರ ವಿತರಣೆ ಮಾಡದೇ ದೂರುಗಳ ಆಧಾರಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿತ್ತು. ದೂರಿನ ಮೇರೆಗೆ ಸೇವೆಯಿಂದ ಅಮಾನತ್ ಗೊಳಿಸಿ ಆದೇಶಿಸಿದ್ದಾರೆ.





Recent Comments