ರಾಯಚೂರು,ಜೂ.೧೮- ಕನ್ನಡ ಶಾಲೆಗಳ ಉಳುವಿಗೆ ಗೋಕಾಕ ಮಾದರಿಯ ಚಳುವಳಿ ಅಗತ್ಯವಾಗಿದೆ ಎಂದು ಹಿರಿಯ ಚಲನಚಿತ್ರ ನಟ ಟೆನ್ನಿಸ್ ಕೃಷ್ಟ ಅಭಿಪ್ರಾಯಪಟ್ಟರು.ಅವರಿಂದು ಕನ್ನಡಸೇನೆ ಅಯೋಜಿಸಿದ್ದ ಕನ್ನಡ ಜಾಗೃತಿ ಜಾಥಾದಲ್ಕಿ ಭಾಗವಹಿಸಿ ಮಾಧ್ಯಮ ಗಳೊಂದಿಗೆ ಮಾತನಾಡಿದರು. ಸರಕಾರವೇ ಇಂಗ್ಲೀಷ ಮಾದ್ಯಮವಶಾಲೆಗಳನ್ನು ಪ್ರಾರಂಭಿಸುತ್ತಿರುವಾಗ ಕನ್ನಡ ಮಾಧ್ಯಮಕಡ್ಡಾಯಗೊಳಿಸುವ ಅಗತ್ಯವಿದೆ. ಕನ್ನಡ ಉಳಿದರೆ ಕನ್ನಡಿಗರು,ಕನ್ನಡ ಚಿತ್ರೋಧ್ಯಮ ಉಳಿಯುತ್ತದೆ. ಕನ್ನಡ ಹೋರಾಟ ಕ್ಷಿಣಿಸಿಲ್ಲ.ಮತ್ತಷ್ಟು ಹೋರಾಟ ಬೇಕಿದೆ.ಕನ್ನಡ ಚಿತ್ರರಂಗದ ಹಿರಿಯರಾದ ರವಿಚಂದರ ಶಿವರಾಜ ನೇತೃತ್ವದಲ್ಲಿ ಹೋರಾಟ ನಡೆಸಲು ಚರ್ಚೆ ಮಾಡಲಾಗುತ್ತದೆ. ಕನ್ನಡ ಉಳುವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕನ್ನಡ ಸೇನೆಯವರಾಜ್ಯಾಧ್ಯಕ್ಷ ಕೆ.ಎಂ.ಕುಮಾರ ಸೇರಿ ಅನೇಕರಿದ್ದರು.





Recent Comments