ರಾಯಚೂರು, ಸೆ.೨- ಜಿಲ್ಲೆಯ ಮಾನವಿ ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಉಪಹಾರ ಸೇವಿಸಿ ಅಸ್ವಸ್ಥರಾದ ಘಟನೆ ಜರುಗಿದೆ. ವಿದ್ಯಾರ್ಥಿಗಳನ್ನು ಮಕ್ಕಳ ಅಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿರವಾಗಿದ್ದು, ನಾಲ್ಕುಜನ ಮಕ್ಕಳು ಬಿಡುಗಡೆಯಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಶಾಲೆ ಪ್ರಾಚಾರ್ಯರು ಹಾಗೂ ಅಡುಗೆ ಸಿಬ್ಬಂದಿ ಊರಲ್ಲಿ ಇಲ್ಲದೆ ಇದ್ದು ಬೇರೆಯವರಿಂದ ಅಡುಗೆ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಲ ಪೋಷಕರು ಅತಂಕಕ್ಕೆ ಒಳಗಾಗಿದ್ದಾರೆ.ಜಿಲ್ಲೆಯಲ್ಲಿ ಮೇಲಿಂದ ಮೇಲೆ ಘಟನೆಗಳು ಮರುಕಳಿಸುತ್ತಿವೆ. ಸಿಂಧನೂರಿನಲ್ಲಿ ಇತ್ತಿಚಗೆ ವಿದ್ಯಾರ್ಥಿನಿಯರು ಉಪಹಾರಚಸೇವಿಸಿ ಅನಾರೋಗ್ಯ ಕ್ಕೆ ಗುರಿಯಾಗಿದ್ದರು.ಈಗ ಮಾನವಿಯಲ್ಲಿ ಘಟನೆ ನಡೆದಿದೆ.





Recent Comments