Wednesday, July 29, 2026
Google search engine
Homeರಾಜ್ಯಸಂಸತ್ ಅಧಿವೇಶನ; ಚುನಾವಣೆ ಆಯೋಗವನ್ನುಭಯೋತ್ಪಾದನೆ ಸಂಸ್ಥೆ ಎಂದ ಸಂಸದ ಕುಮಾರನಾಯಕ

ಸಂಸತ್ ಅಧಿವೇಶನ; ಚುನಾವಣೆ ಆಯೋಗವನ್ನುಭಯೋತ್ಪಾದನೆ ಸಂಸ್ಥೆ ಎಂದ ಸಂಸದ ಕುಮಾರನಾಯಕ

ರಾಯಚೂರು,ಜು.೧೯- ಮತದಾರರ ವಿಶೇಷ ಮತದಾರರ ಪರಿಷ್ಕರಣೆ (ಎಸ್ಐಆರ್) ವಿರೋಧಿಸುವ ಭರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಂಸದ ಜಿ.ಕುಮಾರನಾಯಕ ಚುನಾವಣಾ ಆಯೋಗ ವನ್ನು ಭಯೋತ್ಪಾದನೆ ಸಂಸ್ಥೆ ಎಂದು ಹೇಳಿದ್ದಾರೆ.ರಾಯಚೂರಿನಲ್ಲಿ ಮಾಧ್ಯಮ ಗೊಷ್ಟಿ ಉದ್ದೇಶಿಸಿ ಮಾತನಾಡಿ ಸೋಮವಾರ(೨೦) ರಿಂದ ಪ್ರಾರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಕೆಂದ್ರ ಸರ್ಕಾರ ಮಂಡಿಸಲು ಹೊರಟಿರುವ ಏಳು‌ಮಸೂದೆಗಳ ಕುರಿತು ಮಾಹಿತಿ ನೀಡಿದರು.ಜನವಿರೋಧಿಯಾಗಿರುವ ಮಸೂದೆಗಳನ್ನು ವಿರೋಧಿಸುವದಾಗಿ ಹೇಳಿ ಅವೈಜ್ಞಾನಿಕ ವಾಗಿರುವ ಎಸ್ ಐಆರ್ ಜನರ ಪೌರತ್ವ ಕಿತ್ತಿಕೊಳ್ಳಲಿದೆ.ಪಶ್ಚಿಮ ಬಂಗಾಲದ ನಿದೇರ್ಶನ ರಾಜ್ಯದಲ್ಲಿಯು ಮತದಾರರ ಕಡಿತಗೊಳಿಲಾಗುತ್ತಿದೆ ಎಂದು ಆರೋಪಿಸಿದರು. ಈ ಹಿಂದೆ ಟಿ.ಎನ್ .ಶೇಷನವಸೇರಿದಂತೆ ಅನೇಕ ಕಾರ್ಯನಿರ್ವಹಿಸಿರುವ ಸಾಯ್ವತ್ತತೆ ಸಂಸ್ಥೆ ಅಧಿಕಾರ‌ ಕಿತ್ತಿಕೊಳ್ಳಲಾಗುತ್ತಿದೆ.ಚುನಾವಣಾ ಆಯೋಗ ಭಯೊತ್ಪಾದನೆ ಸಂಸ್ಥೆ ಯಾಗಿ ಕೆಲಸ‌ಮಾಡುತ್ತಿದೆ.ಭಯ ಹುಟ್ಟಿಸುವದೂ ಭಯೋತ್ಪಾದನೆ ಯಾಗಿದೆ ಎಂದು ಸಮರ್ಥಿಸಿಕೊಂಡರು.

RELATED ARTICLES
- Advertisment -
Google search engine

Most Popular

Recent Comments