ರಾಯಚೂರು .ಜೂ.೨೪-ಮಹರ್ಷಿ ವಾಲ್ಮೀಕಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಶ್ರೀ ಬಸನಗೌಡ ದದ್ದಲ್ ಅವರು ಜೂ. 24ರಂದು ಮಾಮಡದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ 5054 ಯೋಜನೆಯಡಿ ಮಾಮಡದೊಡ್ಡಿಯಿಂದ ತಿಮ್ಮಪ್ಪ ಗುಡಿಯವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.1ಕೋಟಿ 50 ಲಕ್ಷ ರೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದಕೊರವಿಹಾಳ ಗ್ರಾಮದಲ್ಲಿ CMIDC ಯೋಜನೆಯಡಿ ಕೊರವಿಹಾಳದಿಂದ ಗಂಜಳ್ಳಿ ರಸ್ತೆ ಅಭಿವೃದ್ಧಿಗೆ ಚಾಲನೆ, 3 ಕೋಟಿ ರೂ ಲೋಕೋಪಯೋಗಿ ಇಲಾಖೆ ಶಿವವಿಲಾಸನಗರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಂಟಪ್ಪ ಭೂಮಿ ಪೂಜೆ ನೆರವೇರಿಸಿದರು.ಸಗಮಕುಂಟಾ ಗ್ರಾಮದಲ್ಲಿ ಸಗಮಕುಂಟಾದಿಂದ ಗಂಜಳ್ಳಿ ಗ್ರಾಮದವರೆಗೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. 1ಕೋಟಿ 50 ಲಕ್ಷ ರೂ ಪಂಚಾಯತ್ ರಾಜ್ ಇಲಾಖೆ ಮಾಡಮಾನದೊಡ್ಡಿ ಗ್ರಾಮದಲ್ಲಿ TSP ಯೋಜನೆಯಡಿ ವಾಲ್ಮೀಕಿ ಭವನ ನಿರ್ಮಾಣ ಭೂಮಿ ಪೂಜೆ NK ಇಲಾಖೆ *ದೇವರ ದರ್ಶನ ಪಡೆದರು:* ಜೂ. 24ರಂದು ಗ್ರಾಮೀಣ ಪ್ರವಾಸ ಕೈಗೊಂಡ ವೇಳೆಯಲ್ಲಿ ಶಾಸಕರು, ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನ ಹಾಗೂ ಶ್ರೀ ದತ್ತಾತ್ರೇಯ ದರ್ಶನಾಶೀರ್ವದ ಪಡೆದರು.ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಹಿರಿಯ ಮುಖಂಡರು, ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.





Recent Comments