ರಾಯಚೂರು,ಜು.೧೬- ಸಿಂಧನೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಧಾರುಣ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.ಮೃತ ಮಗುವನ್ನು ಅನಂ ಅಬ್ದುಲ್ ರಜಾಕ್ (1½) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಸೀರೆಯಿಂದ ಕಟ್ಟಿದ ಜೋಳಗಿಯಲ್ಲಿ ಮಗುವನ್ನು ಮಲಗಿಸಲಾಗಿದ್ದಾಗ ಘಟನೆ ನಡೆದಿದೆ. ಪೋಷಕರು ಮನೆಯ ಮುಂಭಾಗದಲ್ಲೇ ಕಟ್ಟೆಯ ಮೇಲೆ ಮಲಗಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಬೀದಿ ನಾಯಿಗಳು ಜೋಳಗಿಯಲ್ಲಿದ್ದ ಮಗುವಿನ ಮೇಲೆ ದಾಳಿ ನಡೆಸಿ ಎಳೆದೊಯ್ದಿವೆ ಎಂದು ತಿಳಿದುಬಂದಿದೆ.ಯಾವುದೆ ಪ್ರಕರಣ ದಾಖಲಾಗಿಲ್ಲ.





Recent Comments