ರಾಯಚೂರು, ಜು.೨೭- ಮುಲ್ಲಾ ಎಂದರೆ ಮುಸ್ಲಿ ಪದ ಸಮನಾರ್ಥಕ ಪದ ಅಲ್ಲ.ಸತ್ಯ ಹೇಳಿ ಜೈಲಿಗೆ ಜನರಪರವಾಗಿ ಹೋಗಲುವಸಿದ್ದವೆಂದು ಮಾಜಿ ಸಚಿವ ಸಿ.ಟಿ.ರವಿ ತಮ್ನ ಹೇಳಿಕೆ ಯನ್ನ ಸಮರ್ಥಿಸಕೊಂಡಿದ್ದಾರೆ.ಅವರಿಂದ ಬರಪರಸ್ಥಿತಿ ಅಧ್ಯಯನಕ್ಕೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಛತ್ತರ ಗ್ರಾಮಕ್ಕೆ ಭೇಟಿ ನೀಡಿದಾಗ ಮಾಧ್ಯಮ ಗಳೊಂದಿಗೆಮಾತನಾಡಿದರು.ಬ್ರಷ್ಟಚಾರ ಮಾಡಿ,ರೇಪ್ ಮಾಡಿ ಜೈಲಿಗೆ ಹೋಗಬಾರದು ಜನಪರವಾಗಿ ಸತ್ಯವನ್ನು ನುಡಿದು ಜೈಲಿಗೆ ಹೋಗುವದು ಹೆಮ್ಮೆ ಎಂದರು. ದೇಶದವಸೈನಿಕರ ಟ್ಯಾಂಕಿಗೆ ಬೆಂಕಿ ಹಚ್ಚುವದು,ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮಾತನಾಡಿರುವ ಮುಲ್ಲಾಗಳ ಮಾತನಾಡಿದ್ದೇನೆ. ಬಾಲ್ಯದ ಜೀವನದಿಂದಲೇಜೈಲು ಕಂಡಿದ್ದು ನನಗೆ ಹೋಸದೇನು ಅಲ್ಲ.ಸುಳ್ಳು ದೂರು ಆಧಾರಿಸಿ ಬಂಧಿಸಲು ಹೊರಟಿದ್ದಾರೆ. ಭಗವದ್ಗೀತೆ. ಶ್ರೀರಾಮ ಸೇರಿದಂತೆ ಸನಾತನ ಧರ್ಮದ ವಿರುದ್ದ ಮಾತನಾಡಿದವರಿಗೆ ರಾಜ್ಯ ಸರಕಾರ ಜೈಲಿಗೆ ಹಾಕಿತ್ತಾ ಎಂದು ಪ್ರಶ್ನಿಸಿದರು.ಒಬ್ಬ ಮುಲ್ಲಾನ ಬಗ್ಗೆ ಮಾತನಾಡಿದ್ದನ್ನು ಮುಸ್ಲಿಂರ ವಿರುದ್ದ ಮಾತನಾಡಿರುವದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹೇಳಿಕೆ ಈಗಲೂ ನಾನು ಬದ್ದವೆಂದರು. ಈ ಸಂಧರ್ಬದಲ್ಲಿ ಶಾಸಕರುಗಳಾದ ಡಾ.ಶಿವರಾಜ ಪಾಟೀಲ್, ಮಾನಪ್ಪ ವಜ್ಜಲ ಸೇರಿ ಅನೇಕರಿದ್ದರು.





Recent Comments